ಬೇಕಾಗಿತ್ತೆ ಈ ದೂರದ ಹಾದಿ

ಬೆಲ್ಟ್ ಕಟ್ಟಿಕೊಂಡೇ ಗಡದ್ದಾಗಿ ಕುಳಿತದ್ದು
ಹೀಗೇ ಮಂಪರಕ್ಕೆ ಸ್ವಲ್ಪ ಒರಗಿರಬೇಕಷ್ಟೆ
ಎಲ್ಲೋ ಬುಲ್‌ಡೋಜರ್‌ದ ಸದ್ದು
ಜಾಲಾಡಿಸಿದ ಅನುಭವ
ಬಿಟ್ಟೂಬಿಡದೆ ಏನೇನೋ ಪೈಲಟ್‌ನ ಮಾತುಗಳು
ಗಗನಸಖಿಯ ಒಂದೇ ಸಮನದ ಉಲಿತ
“ನಿಮ್ಮ ಖುರ್ಚಿಯ ಪಟ್ಟಿ ಕಟ್ಟಿಕೊಳ್ಳಿ”

ಕಣ್ಣು ಬಿಟ್ಟದ್ದಷ್ಟೇ, ಉಸಿರು ನೆತ್ತಿಗೆ ಏರಿ
ಸಾವಿನಂಚಿಗೆ ಕರೆಯುವ ಎದೆ ಬಡಿತ
ಕಿಡಕಿಯಾಚೆ ಆನೆ ಐರಾವತ ಕರಿಮೋಡಗಳ
ಘರ್ಜನೆ ದಟೈಸಿದ ಕಪ್ಪು ಛಾಯೆ
ಉಸಿರುಗಟ್ಟಿ ಕಿತ್ತೋಡುವ
ನೊರೆನೊರೆಯ ಬಿಳಿಮೋಡ ಮೊಲಗಳು
ಬಿಟ್ಟೂಬಿಡದೆ ಎಗ್ಗರಿಸಿ
ಹೆದರಿಸುವ ಡೈನಾಸೋರುಗಳು

ಸಾವಿರಾರು ಮೈಲು ಹಿಂದೆ ಬಿಟ್ಟು ಬಂದ
ಮಕ್ಕಳ ಮುಗ್ಧ ಮುಖ; ಮುಂದೆ
ಸಾವಿರಾರು ಮೈಲಿನಲಿ ಕಾತರಿಸಿ ಕಾಯುತಿರುವ
ಜೀವದ ಜೀವ
ಒಬ್ಬೊಂಟಿ ಪಯಣಿಗಳು ಕಣ್ತುಂಬ ನೀರು.

ಮತ್ತೆ ಮತ್ತೆ ಅದೇ ಉಲಿತ
(ಏಳದಿರಿ ಸೀಟುಬಿಟ್ಟು, ನಡೆದಾಡದಿರಿ,
ಹೊರಗಡೆ ಭಾರಿ ಮೋಡಗಳು, ಗುಡುಗುಮಿಂಚು
ಬಿಗಿಯಾಗಿರಲಿ ಸೊಂಟಪಟ್ಟಿ ಎದೆಗುಂದದಿರಿ)

ಅಜ್ಜಿಯ ಪ್ರೀತಿ ಅಮ್ಮ ಅಪ್ಪನ ಬಾಳದೋಣಿ
ಸಾಧನೆಯ ಕನಸಿಗೆ ಕಾಲುಹಾದಿಯಲಿ
ಓಡಾಡಿ ದಕ್ಕಿಸಿಕೊಂಡ ಹೆಮ್ಮೆ
ಈತ ಒಮ್ಮೊಮ್ಮೆ ಸೂರ್ಯ ಚಂದ್ರ
ಎಲ್ಲರ ಮುಖಗಳು ಕಣ್ಣಿಗೆ ಕಟ್ಟುತ್ತವೆ
ದುಗುಡಿನ ಸವಾರಿಗರು
ಕಾಣದ ದೇವರಿಗೆ ಹರಕೆ ಹೊರುವ ಸಮಯ

ಬೇಕಾಗಿತ್ತೆ ಈ ದೂರದ ಹಾದಿ,
ಹಣದ ಬೆನ್ನೇರಿಕೆಗೇನಾದರು ಒಳಸಂಚೆ…..
ಕನವರಿಕೆ ಕಳವಳ ತಳಮಳ
ಬಿಕ್ಕಳಿಕೆ ಅಸಹಾಯಕತೆ
ಕಿಡಕಿಯಾಚೆ ಆನೆಗಳ ಗುದ್ದಾಟ
ಸೀಳಿ ಹೊರಟಿರುವ ಈ ಜಂಬೋಸವಾರಿ…..
ಸಾವಿಗೆ ಕ್ಷಣ ಗಣನೆ ಇದ್ದೀತೆ?
ಅಯ್ಯೋ ದೇವರೆ ಬೇಕಾಗಿತ್ತೆ…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವಗತ ಗೀತ
Next post ಎರಡು ನಾಣ್ಯ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys